Wednesday, March 5, 2008

ಪ್ರಶ್ನೆ- ಉತ್ತರ

* ಈಗೀಗ ಶಾಲಾ ಮಕ್ಕಳನ್ನು ಯಾಕೆ ಶಾಲೆಗೆ ಹೋಗುತ್ತೀರಿ ಎಂದರೆ ಊಟ ಮಾಡಲು ಎನ್ನುತ್ತಾರಲ್ಲ?ಪುಣ್ಯ. ಊಟ ಮಾಡಿ ನಿದ್ರಿಸಲು ಅನ್ನುತ್ತಿಲ್ಲ.
* ಕಂಡುಹಿಡಿಯಬೇಕಾದ್ದನ್ನೆಲ್ಲ ಕಂಡುಹಿಡಿದಾಯಿತು. ನಾನೇನು ಕಂಡುಹಿಡಿಯಲಿ?ಏನನ್ನು ಕಂಡುಹಿಡಿಯಬೇಕು ಎಂಬುದನ್ನು!

* ಇಂದಿನ ಮಕ್ಕಳು ಮುಂದಿನ ಪ್ರಜೆಗಳು. ಇಂದಿನ ಯುವಕರು ಮುಂದಿನ...?ಮುದುಕರು!!

* ಚಿತ್ರರಂಗದ ನಟ-ನಟಿಯರು ರಾಜಕೀಯ ಪ್ರವೇಶಿಸಿದರೆ ರಾಜಕಾರಣಿಗಳು ಏನು ಮಾಡಬೇಕು?ಚಿತ್ರದಲ್ಲಿ ಅಜ್ಜ- ಅಜ್ಜಿ ಪಾರ್ಟ್ ಮಾಡಬೇಕು.
* ಮರದಿಂದ ಮರಕ್ಕೆ ಹಾರುವ ಕೋತಿಗೂ ಪಕ್ಷದಿಂದ ಪಕ್ಷದಿಂದ ಪಕ್ಷಕ್ಕೆ ಹಾರುವ ರಾಜಕಾರಣಿಗಳಿಗೂ ವತ್ಯಾಸ ಏನು?ಬಾಲ ಮಾತ್ರ!
* ಅಂದ್ಹಾಗೆ ನಿನ್ನ ಲವ್ ಸ್ಟೋರಿ ಎಲ್ಲೀವರೆಗೆ ಬಂದಿದೆ?ತುಟಿವರೆಗೆ!

* ಪ್ರತೀಕ್ಷಾ ಹಿಂದಿನ ಕಾಲದಲ್ಲಿ ಪತಿಯೇ ಪರದೈವ ಅಂತಿದ್ರು. ಈ ಕಾಲದಲ್ಲಿ?ಪರಪತಿಯೇ ದೈವ ಅನ್ನೋಣವೇ?

* ಪಕ್ಕದ ಮನೆಯ ಹುಡುಗ ಆಂಟಿಯ ಜತೆ ಪರಾರಿಯಾಗಿದ್ದಾನೆ ಮುಂದೇನಾಗಬಹುದು?ಹೆಚ್ಚೆಂದರೆ ಮಕ್ಕಳಾಗಬಹುದು!

* ಪ್ರೇಮಿಗಳು ಲಿಂಬೆ ರಸ ಕುಡಿಯಬಾರದು ಅನ್ನುತ್ತಾರಲ್ಲ?"ಹಾಲಿ’ನಂಥ ಪ್ರೇಮದಲ್ಲಿ ಹುಳಿ ಹಿಂಡುವುದು ಬೇಡ ಅಂತ.

* ೫೦ ವರ್ಷದ ಹಿಂದಿನ ರಾಜಕಾರಣಿಗಳಿಗೂ ಈಗಿನ ರಾಜಕಾರಣಿಗಳಿಗೂ ಇರುವ ವತ್ಯಾಸ ಏನು?ಆಗ ಯುವಕರಾಗಿದ್ದರು. ಈಗ ಮುದುಕರಾಗಿದ್ದಾರೆ!
* ಗುಲಾಬಿ ಪ್ರೀತಿಯ ಸಂಕೇತವಾದರೆ ಮಲ್ಲಿಗೆ ಯಾವುದರ ಸಂಕೇತ?ಮಲ್ಲಿಗೆ ಎಲ್ಲಿಗೆ ಹೋಗೋಣ ಎಂಬುದರ ಸಂಕೇತ!

* ಕವಿದ ಕತ್ತಲು ಮುದುಡಿದ ಪ್ರೀತಿಯ ಸಂಕೇತವೇ?ಛೆ! ಛೆ! ಅದು ಪವರ್ ಕಟ್ ಸಂಕೇತ!!

* ಹಾಲಿನ ಮತ್ತು ಅಲ್ಕೋಹಾಲಿನ ಜಾಹೀರಾತಿಗೆ ಉಪೇಂದ್ರನೇ ಬೇಕು. ಯಾಕೆ?ಯಾಕಂದ್ರೆ "ಉಪ್ಪಿ’ಗಿಂತ ರುಚಿ ಬೇರೆ ಇಲ್ಲ.

* ನಿಮ್ಮನ್ನು ವೀರಪ್ಪನ್ ಅಪಹರಿಸಿದ್ದರೆ ನೀವು ಏನು ಮಾಡುತ್ತೀರಿ?"ನನ್ನಪ್ಪನ್ ಬಿಟ್ಟು ವೀರಪ್ಪನ್ ಜತೆ’ ಅಂತ ಕವನ ಸಂಕಲನ ಬರೀತೀನಿ.

* ಆಶ್ವಾಸನೆಗೆ ಕೊನೆ ಯಾವಾಗ?ಆ"ಶ್ವಾಸ’ ನಿಂತಾಗ* ರಾಜಕೀಯಕ್ಕೆ ಸೇರಿದ ವ್ಯಕ್ತಿಗಳಿಗೆ ಹೊಟ್ಟೆ ಉಬ್ಬಲು ಕಾರಣವೇನು?ತಿಂದ ದುಡ್ಡು ಕರಗದೇ ಇರುವುದು.

* ಈಗಿನ ಹುಡುಗಿಯರು ಕೂದನ್ನು ಬಾಬ್‌ಕಟ್ ಮಾಡಲು ಕಾರಣ?ಕೂದಲನ್ನಷ್ಟೇ ಅಲ್ಲ ಬಟ್ಟೆಯನ್ನೂ ಗಿಡ್ಡ ಮಾಡಿದ್ದಾರೆ.